ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, April 19, 2012

ಲೇಖನ- "ಭಾರತ - ಪಾಕಿಸ್ತಾನ ಸಂಬಂಧಗಳು: ’ತೀರ್ಥಯಾತ್ರೆ’ಯ ಆಚೆ ಈಚೆ"



ಪಾಕಿಸ್ತಾನಿ ಅಧ್ಯಕ್ಷ ಅಸಿಫ್ ಆಲಿ ಜರ್ದಾರಿಯವರ ಏಪ್ರಿಲ್ ೮ರ ಭಾರತ ಭೇಟಿ ಎರಡೂ ದೇಶಗಳ ಮಾಧ್ಯಮಗಳಲ್ಲಿ ಕೆಲವು ದಿನಗಳವರೆಗೆ ಸಾಕಷ್ಟು ಸದ್ದುಗದ್ದಲಕ್ಕೆ ಕಾರಣವಾಯಿತುಜರ್ದಾರಿಯವರ ಅಜ್ಮೀರ್ ತೀರ್ಥಯಾತ್ರೆಯನ್ನು ಭಾರತಕ್ಕೆ ಅಧಿಕೃತ ಭೇಟಿಯಂತೆ ಬಗೆದು ಅದರಿಂದ ಎರಡೂ ದೇಶಗಳ ಮೈತ್ರಿವೃದ್ಧಿಗೆ ಸಹಕಾರಿಯಾಗುತ್ತದೆಂದು ಪತ್ರಿಕೆಗಳು ಮತ್ತು ವಿಶ್ಲೇಷಕರು ವರ್ಣಿಸಿದರುವಾಸ್ತವವಾಗಿ ಅದು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ಟೀಯವರ ದರ್ಗಾಗೆ ಜರ್ದಾರಿಯವರ ಖಾಸಗೀ ಭೇಟಿಯಾಗಿತ್ತುಆ ಖಾಸಗೀ ಭೇಟಿಯನ್ನು ದ್ವಿಪಕ್ಷೀಯ ಮಾತುಕಥೆಗಳಿಗೆ ಒಂದು ಪುಟ್ಟ ವೇದಿಕೆಯನ್ನಾಗಿ ಬದಲಾಯಿಸಿದ್ದು ಪ್ರಧಾನಿ ಮನಮೋಹನ್ ಸಿಂಗ್ದೊರಕಿದ ಅವಕಾಶದಲ್ಲಿ ಅವರದನ್ನು ಚೊಕ್ಕವಾಗಿ ಮಾಡಿದ್ದಾರೆ.   ಇದಕ್ಕೂ ಮೀರಿದ ಪ್ರತಿಕ್ರಿಯೆಯನ್ನು ನವದೆಹಲಿಯಿಂದ ಬಯಸುವುದು ಅವ್ಯವಾಹಾರಿಕಈ ನಿಟ್ಟಿನಲ್ಲಿ ನೋಡಿದಾಗ ಜರ್ದಾರಿಯವರ ಭೇಟಿಗೆ ಉತ್ತರವಾಗಿ ಪ್ರಧಾನಿ ಸಿಂಗ್ ಆದಷ್ಟು ಬೇಗನೆ ಪಾಕಿಸ್ತಾನಕ್ಕೆ ಭೇಟಿ ನೀಡಬೇಕೆಂದು ರ‍್ಯಾಡ್‌ಕ್ಲಿಫ್ ಗಡಿಯ ಎರಡೂ ಕಡೆಯ ಮಾಧ್ಯಮಗಳು, ಎಕ್ಸ್‌ಪರ್ಟ್ಗಳು ದನಿಯೆತ್ತರಿಸಿ ಕೂಗಿದ್ದು ನಗೆ ತರಿಸುತ್ತದೆಪ್ರಧಾನಿ ಸಿಂಗ್ ಇಸ್ಲಾಮಾಬಾದ್‌ನಲ್ಲಿ ಜರ್ದಾರಿ ಅಥವಾ ಗಿಲಾನಿಯವರ ಜತೆ ಕೆಲವು ತಾಸು ಕಳೆದು, ಆತಿಥ್ಯ ಸವಿದು, ನಂತರ ಪಾಕಿಸ್ತಾನದಲ್ಲಿ ಎಲ್ಲಿಗೆ ಭೇಟಿ ನೀಡಬೇಕುನಾನ್‌ಕಾನಾ ಸಾಹಿಬ್‌ಗಾ?
ಜವಾಹರ್‌ಲಾಲ್ ನೆಹರೂ - ಲಿಯಾಖತ್ ಆಲಿ ಖಾನ್ ಅವರಿಂದ ಹಿಡಿದು ಮನನೋಹನ್ ಸಿಂಗ್ - ಯೂಸುಫ್ ರಾಜಾ ಗಿಲಾನಿಯವರೆಗೆ ಎರಡೂ ದೇಶಗಳ ನಾಯಕರು ಕಳೆದ ಆರು ದಶಕಗಳಿಗೂ ಮಿಕ್ಕಿದ ಕಾಲದಲ್ಲಿ ಪರಸ್ಪರ ಭೇಟಿಯಾಗುತ್ತಲೇ ಇದ್ದಾರೆಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕುತ್ತಲೇ ಇದ್ದಾರೆಆದರೂ ದಕ್ಷಿಣ ಏಶಿಯಾದ ಈ ಎರಡು ದೇಶಗಳ ನಡುವಿನ ವೈಷಮ್ಯ ಅಳಿದಿಲ್ಲ, ಸ್ನೇಹಯುತ ಸಹಬಾಳ್ವೆ ಸಾಧ್ಯವಾಗಿಲ್ಲಹೀಗಿರುವಾಗ ಕೆಲವೇ ಗಂಟೆಗಳ ಭೇಟಿಯಿಂದ ಅದ್ಭುತವೊಂದನ್ನು ನಿರೀಕ್ಷಿಸುವುದು ಹಾಸ್ಯಾಸ್ಪದಎರಡು ಬದಲಾಯಿಸಲಸಾಧ್ಯವಾದ ನಕಾರಾತ್ಮಕ ವಾಸ್ತವಗಳ ಕಾರಣದಿಂದಾಗಿ ದಕ್ಷಿಣ ಏಶಿಯಾದ ಈ ಎರಡು ದೇಶಗಳ ನಡುವೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆಈ ಎರಡು ವಾಸ್ತವಗಳನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ.
ಧರ್ಮದ ಆಧಾರದ ಮೇಲಿನ ದೇಶವಿಭಜನೆಯ ಭೀಕರ ನರಹತ್ಯೆ, ದಾರುಣ ನೆನಪುಗಳನ್ನು ಹೊತ್ತ ಮಿಲಿಯಾಂತರ ಮಂದಿಯ ವಲಸೆ, ಹಾಗೂ ಕೆಲವೇ ವಾರಗಳಲ್ಲಿ ಆರಂಭವಾದ ಕಶ್ಮೀರ ಯುದ್ಧಗಳಿಂದಾಗಿ ವೈರತ್ವವನ್ನು ಮೈಗೂಡಿಸಿಕೊಂಡು ಭಾರತ ಮತ್ತು ಪಾಕಿಸ್ತಾನಗಳು ಅಸ್ತಿತ್ವಕ್ಕೆ ಬಂದು ಇನ್ನೇನು ಆರೂವರೆ ದಶಕಗಳಾಗುತ್ತಿವೆಈ ಧೀರ್ಘ ಆವಧಿಯಲ್ಲಿ ಎರಡೂ ದೇಶಗಳ ನಡುವೆ ಸತತವಾಗಿ ಮುಂದುವರೆಯುತ್ತಿರುವ ವೈಷಮ್ಯಕ್ಕೆ ಧರ್ಮದ್ವೇಷವೇ ಕಾರಣ ಎಂಬ ವಾದ ಜನಜನಿತವಾಗಿದೆಈ ವಾದದಲ್ಲಿ ಹುರುಳಿಲ್ಲಈ ದ್ವೇಷದ ಹಿಂದಿರುವುದು ಎರಡೂ ದೇಶಗಳ ನಡುವಿನ ಗಡಿಯ ಸ್ವರೂಪ.
ನಲವತ್ತೇಳರಲ್ಲಿ ಬ್ರಿಟಿಷರು ಉಪಖಂಡವನ್ನು ವಿಭಜಿಸಿ ನವರಾಷ್ಟ್ರಗಳ ನಡುವೆ ಎಳೆದ ಗಡಿರೇಖೆ, ಮುಖ್ಯವಾಗಿ ಎರಡೂ ಪಂಜಾಬ್‌ಗಳನ್ನು ವಿಭಾಗಿಸುವ ರ‍್ಯಾಡ್‌ಕ್ಲಿಫ್ ರೇಖೆ ಸಾಗುವುದು ಸಿಂಧೂ ನದೀಬಯಲಿನ ನಡುಮಧ್ಯದಲ್ಲಿಅಂದರೆ ಸಮತಟ್ಟಾದ ನೆಲದಲ್ಲಿಇದೇ ತಾಪತ್ರಯದ ಮೂಲಯಾವುದೇ ನೈಸರ್ಗಿಕ ತಡೆಗಳಿಲ್ಲದ, ಸಮತಟ್ಟಾದ ಬಯಲಿನಲ್ಲಿ ಸಾಗುವ ಗಡಿರೇಖೆ ಎರಡು ಅಲುಗಿನ ಕತ್ತಿಯಂತೆಇದು ಎರಡು ದೇಶಗಳಿಗೂ ಸೇನಾ ದೃಷ್ಟಿಯಿಂದ ಸಮಾನ ಅನುಕೂಲ, ಅವಕಾಶಗಳನ್ನೊದಗಿಸುತ್ತದೆಹೀಗಾಗಿ ಇಂತಹ ರೇಖೆಯ ಎರಡೂ ಕಡೆ ಇರುವ ದೇಶಗಳ ನಡುವೆ ಸಹಜವಾಗಿಯೇ ಅಪನಂಬಿಕೆ, ಪರಸ್ಪರರ ಹಂಚಿಕೆ ಹಾಗೂ ಹುನ್ನಾರಗಳ ಬಗ್ಗೆ ನಿರಂತರ ಸಂದೇಹಗಳು ಮೂಡುತ್ತದೆಇದರ ಮುಂದಿನ ಪರಿಣಾಮವಾಗಿ ಎರಡೂ ದೇಶಗಳೂ ಕಟ್ಟೆಚ್ಚರದಲ್ಲಿ ಗಡಿಯನ್ನು ಕಾಯುತ್ತವೆ ಮತ್ತು ಯಾವಾಗಲೂ ಯುದ್ಧಕ್ಕೆ ತಯಾರಾಗಿರುತ್ತವೆಈ ನಿರಂತರ ಯುದ್ಧಸನ್ನದ್ಧ ಸ್ಥಿತಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಯಾವಾಗಲೂ ಸೂಕ್ಷ್ಮವಾಗಿರಿಸಿಬಿಡುತ್ತದೆಭಾರತ ಮತ್ತು ಪಾಕಿಸ್ತಾನಗಳ ನಡುವೆ ಆಗುತ್ತಿರುವುದು ಇದೇಎರಡೂ ದೇಶಗಳ ನಡುವಿನ ಈ ಎರಡು ಅಲುಗಿನ ಕತ್ತಿಯಂತಹ ಗಡಿಯಿಂದಾಗಿ ಉಂಟಾಗಿರುವ ಈ ವೈಮನಸ್ಯ ಧರ್ಮವನ್ನು ಮೀರಿದ್ದುನಿಜ ಹೇಳಬೇಕೆಂದರೆ ಎರಡೂ ದೇಶಗಳ ಜನತೆಗಳ ಧರ್ಮ ಒಂದೇ ಆಗಿದ್ದರೂ ಗಡಿಯ ಸ್ವರೂಪದಿಂದಾಗಿ ಪರಸ್ಪರ ಅಪನಂಬಿಕೆ, ವೈಮನಸ್ಯ, ದ್ವೇಷ ಉಂಟಾಗುತ್ತಿತ್ತುಇರಾನ್ ಮತ್ತು ಇರಾಕ್‌ಗಳ ಜನತೆ ಮುಸ್ಲಿಮರಾಗಿದ್ದರೂ ಷಟ್ ಅಲ್ ಅರಬ್ ನೆಲ ಹಾಗೂ ಜಲ ಗಡಿಯ ಸ್ವರೂಪದಿಂದಾಗಿ ಅವೆರಡು ದೇಶಗಳ ನಡುವೆ ಅತ್ಯುಗ್ರ ವೈಷಮ್ಯ ಸೃಷ್ಟಿಯಾಗಿರುವುದನ್ನು ಇಲ್ಲಿ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬೇಕು.
ಎರಡೂ ದೇಶಗಳ ನಡುವಿನ ಮತ್ತೊಂದು ಸಧ್ಯಕ್ಕೆ ಪರಿಹರಿಸಲಾಗದ ಸಮಸ್ಯೆಯೆಂದರೆ ಕಶ್ಮೀರ ವಿವಾದಕಶ್ಮೀರ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾದರೂ ಮುಸ್ಲಿಮರ ಜನಸಾಂದ್ರತೆ ಹೆಚ್ಚಾಗಿರುವುದು ಶ್ರೀನಗರವನ್ನೊಳಗೊಂಡ ಕಶ್ಮೀರಿ ಕಣಿವೆ ಹಾಗೂ ರಾಜ್ಯದ ಪಶ್ಚಿಮ ಮತ್ತು ವಾಯುವ್ಯ ಭಾಗಗಳಲ್ಲಿದಕ್ಷಿಣದ ಜಮ್ಮು ಪ್ರದೇಶದಲ್ಲಿ ಹಿಂದೂಗಳು ಅಧಿಕ ಸಂಖ್ಯೆಯಲ್ಲಿದ್ದರೆ ಪೂರ್ವದ ವಿಶಾಲ ಲಡಾಖ್ ಪ್ರದೇಶ ಬೌದ್ಧರ ನೆಲೆಒಂದುವೇಳೆ ಪಂಜಾಬ್ ಮತ್ತು ಬಂಗಾಲಗಳಂತೆ ಕಶ್ಮೀರವೂ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟಿದ್ದಿದ್ದರೆ ಅವರು ಆ ರಾಜ್ಯವನ್ನೂ ಎರಡು ತುಂಡು ಮಾಡಿ ಮುಸ್ಲಿಂ ಪ್ರದೇಶವನ್ನು ಪಾಕಿಸ್ತಾನಕ್ಕೂ, ಹಿಂದೂ ಮತ್ತು ಬೌದ್ಧ ಪ್ರದೇಶಗಳನ್ನು ಭಾರತಕ್ಕೂ ನೀಡುತ್ತಿದ್ದರು೧೯೪೭-೪೮ರ ಪ್ರಥಮ ಕಶ್ಮೀರ ಯುದ್ಧದಲ್ಲಿ ಕಣಿವೆಯೊಂದನ್ನುಳಿದು ಮತ್ತೆಲ್ಲಾ ಮುಸ್ಲಿಂ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡ ಪಾಕಿಸ್ತಾನ ಅಷ್ಟಕ್ಕೇ ತೃಪ್ತವಾಗದೇ ಹಿಂದೂ ಬಹುಸಂಖ್ಯಾತ ಜಮ್ಮು ಮತ್ತು ಬೌದ್ಧ ಬಹುಸಂಖ್ಯಾತ ಲಡಾಖನ್ನೂ ಸೇರಿಸಿದಂತೆ ಇಡೀ ಜಮ್ಮು ಮತ್ತು ಕಶ್ಮೀರ ರಾಜ್ಯವೇ ತನಗೆ ಬೇಕು ಅನ್ನುತ್ತಿದೆ ಮತ್ತು ಅದಕ್ಕಾಗಿ ೧೯೬೫ರಲ್ಲಿ ಮತ್ತೆ ಭಾರತದ ವಿರುದ್ಧ ವಿಫಲ ಸೈನಿಕ ಕಾರ್ಯಾಚರಣೆ ನಡೆಸಿದೆ೧೯೮೪ರ ಸಿಯಾಚಿನ್ ಘರ್ಷಣೆ ಮತ್ತು ೧೯೯೯ರ ಕಾರ್ಗಿಲ್ ಕದನಗಳು ಸಹಾ ಪಾಕಿಸ್ತಾನದ ಈ ಕಶ್ಮೀರೀ ದಾಹದ ಪರಿಣಾಮಗಳುಉಪಖಂಡದ ಮುಸ್ಲಿಮರಿಗಾಗಿ ಮಾತ್ರ ಎಂಬ ಹೇಳಿಕೆಯೊಡನೆ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನ ಹಿಂದೂ ಜಮ್ಮು ಮತ್ತು ಬೌದ್ಧ ಲಡಾಖ್ ಪ್ರದೇಶಗಳೂ ತನಗೇ ಬೇಕು ಎಂದು ಹೇಳುತ್ತಿರುವ ನೀತಿಗೆ ಅರ್ಥವೇನುಈ ಪ್ರಶ್ನೆಗೆ ಉತ್ತರಕ್ಕಾಗಿ ನಾವು ಧರ್ಮದ ಆಚೆ ಹುಡುಕಬೇಕು.
ಪಾಕಿಸ್ತಾನಕ್ಕೆ ನೀರುಣಿಸುವ ಎಲ್ಲ ಪ್ರಮುಖ ನದಿಗಳೂ ಹುಟ್ಟುವುದು ಅಥವಾ ಹರಿದುಬರುವುದು ಭಾರತದ ವಶದಲ್ಲಿರುವ ಹಿಂದೂ ಮತ್ತು ಬೌದ್ಧ ಪ್ರದೇಶಗಳ ಮೂಲಕಈ ಪ್ರದೇಶಗಳು ಖಾಯಂ ಆಗಿ ಭಾರತದ ವಶದಲ್ಲೇ ಉಳಿದರೆ ಆಗ ಪಾಕಿಸ್ತಾನ ತನ್ನ ನೀರಿನ ಅಗತ್ಯಕ್ಕಾಗಿ ಯಾವಾಗಲೂ ಭಾರತದ ದಾಕ್ಷಿಣ್ಯದಲ್ಲಿ ಉಳಿಯಬೇಕಾಗುತ್ತದೆಆ ನದಿಗಳನ್ನು ಭಾರತ ತಡೆಗಟ್ಟಿಬಿಟ್ಟರೆ ಪಾಕಿಸ್ತಾನದ ಮೇಲೆ ಅದರ ಪರಿಣಾಮ ಭೀಕರ೧೯೪೮ರ ಏಪ್ರಿಲ್‌ನಲ್ಲಿ ಪಂಜಾಬ್‌ನ ಫಿರೋಜ್‌ಪುರ್ ಹೆಡ್‌ವರ್ಕ್ಸ್‌ನಿಂದ ಪಾಕಿಸ್ತಾನಕ್ಕೆ ನೀರು ಹರಿದುಹೋಗುವುದನ್ನು ಭಾರತ ತಾತ್ಕಾಲಿಕವಾಗಿ ತಡೆಹಿಡಿದದ್ದು ಪಾಕಿಸ್ತಾನೀಯರನ್ನು ಇನ್ನೂ ದುಃಸ್ವಪ್ನದಂತೆ ಕಾಡುತ್ತಿದೆಅಂಥದೇ ಕ್ರಮವನ್ನು ಭಾರತ ಕಶ್ಮೀರದಲ್ಲೂ ಕೈಗೊಂಡರೇನು ಎನ್ನುವ ಆತಂಕ ಅವರಲ್ಲಿದೆ೧೯೬೦ರ ಸಿಂಧೂ ನದಿನೀರು ಹಂಚಿಕೆಯ ಒಪ್ಪಂದದ ಪ್ರಕಾರ ಸಿಂಧೂ, ಝೀಲಂ ಮತ್ತು ಚಿನಾಬ್ ನದಿಗಳ ಮೇಲೆ ಪಾಕಿಸ್ತಾನ ಸಂಪೂರ್ಣ ಹಕ್ಕುಗಳನ್ನು ಪಡೆದುಕೊಂಡರೂ ಆ ದೇಶಕ್ಕೆ ಭಾರತದ ಮೇಲೆ ಪೂರ್ಣ ವಿಶ್ವಾಸ ಉಂಟಾಗಿಲ್ಲಆ ಒಪ್ಪಂದವನ್ನು ಭಾರತ ಏಕಪಕ್ಷೀಯವಾಗಿ ಮುರಿದು ನದಿಗಳನ್ನು ತಡೆಗಟ್ಟಿಬಿಡಬಹುದಾದ ಆತಂಕದಲ್ಲಿ ಪಾಕಿಸ್ತಾನೀಯರು ತೊಳಲುತ್ತಿದ್ದಾರೆತಮ್ಮ ಈ ಆತಂಕ ನಿರಾಧಾರ, ಒಪ್ಪಂದದ ಎಲ್ಲ ಅಂಶಗಳನ್ನೂ ಭಾರತ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂಬ ಸತ್ಯಗಳನ್ನು ಒಪ್ಪಿಕೊಳ್ಳಲಾಗದಷ್ಟು ಅವಿವೇಕ, ಅಪನಂಬಿಕೆ ಅವರಲ್ಲಿ ಮನೆಮಾಡಿದೆಹೀಗಾಗಿಯೇ ಅವರು ಮುಸ್ಲಿಂ ಅಲ್ಲದ ಪ್ರದೇಶಗಳನ್ನು ಕೇಳುತ್ತಿರುವುದುಹಿಂದೂ ಮತ್ತು ಬೌದ್ಧ ಪ್ರದೇಶಗಳ ಮೇಲೂ ತಮ್ಮ ಹತೋಟಿಯನ್ನು ಸ್ಥಾಪಿಸಲು, ತನ್ಮೂಲಕ ತಮ್ಮ ನದಿಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸ್ಥಾಪಿಸಲು ಅವರು ಹೆಣಗುತ್ತಿದ್ದಾರೆಇದರರ್ಥ ಕಶ್ಮೀರ ಸಮಸ್ಯೆಗೆ ಕಾರಣ ಧರ್ಮ ಅಲ್ಲಪಾಕಿಸ್ತಾನದ ಆರ್ಥಿಕವ್ಯವಸ್ಥೆಕಶ್ಮೀರ ಒಂದು ಧಾರ್ಮಿಕ ಪ್ರಶ್ನೆ ಅಲ್ಲಅದೊಂದು ಭೌಗೋಳಿಕ ಮತ್ತು ಆರ್ಥಿಕ ಪ್ರಶ್ನೆಆದರೆ ಪಾಕಿಸ್ತಾನ ಇದನ್ನು ಮುಚ್ಚಿಟ್ಟು ಧಾರ್ಮಿಕ ಕಾರಣವನ್ನು ಮುಂದೆ ಮಾಡುತ್ತಿದೆತನ್ನ ಜನತೆಯನ್ನು ಶತ್ರುಗಳ ವಿರುದ್ಧ ಹುಚ್ಚೆಬ್ಬಿಸಲು ಧರ್ಮಕ್ಕಿಂತಲೂ ಪ್ರಬಲವಾದ ಭಾವನಾತ್ಮಕ ಆಯುಧ ಬೇರೇನಿದೆ?
ಎರಡು ಅಲುಗಿನ ಕತ್ತಿಯಂತಿರುವ ಪಂಜಾಬ್ ಗಡಿರೇಖೆ ಮತ್ತು ಕಶ್ಮೀರ ವಿವಾದ ಎರಡೂ ದೇಶಗಳ ನಡುವೆ ನಿರಂತರ ಅಪನಂಬಿಕೆ, ಸಂದೇಹಗಳನ್ನು ಸೃಷ್ಟಿಸಿವೆಹೀಗಾಗಿ ಎರಡೂ ದೇಶಗಳು ನಿರಂತರವಾಗಿ ಯುದ್ಧಸನ್ನದ್ಧ ಸ್ಥಿತಿಯಲ್ಲಿವೆಒಂದುವೇಳೆ ಎರಡೂ ದೇಶಗಳ ನಡುವೆ ನೈಸರ್ಗಿಕ ತಡೆ ಇದ್ದಿದ್ದರೆ ಇವು ಸ್ವಾತಂತ್ರ್ಯದ ಮೊದಲ ಕೆಲವು ವರ್ಷಗಳು ಪರಸ್ಪರ ಕಾದಾಡಿಕೊಂಡು ನಂತರ ನಿಧಾನವಾಗಿ ತಮ್ಮ ಪಾಡಿಗೆ ತಾವು ಬೇರೆ ಬೇರೆ ದಿಕ್ಕು ಹಿಡಿದು ಸಾಗುತ್ತಿದ್ದವುಪರಿಣಾಮವಾಗಿ ಗಡಿ ಶಾಂತವಾಗಿರುತ್ತಿತ್ತುಶಾಂತ ಗಡಿ ಕಾಲಾನುಕ್ರಮದಲ್ಲಿ ಸ್ನೇಹವೃದ್ಧಿಗೆ ನಾಂದಿಯಾಗುತ್ತಿತ್ತುಆದರೆ ರ‍್ಯಾಡ್‌ಕ್ಲಿಫ್ ಗಡಿರೇಖೆಯನ್ನು ಬದಲಾಯಿಸುವುದು ಸಾಧ್ಯವೇ ಇಲ್ಲಜತೆಗೆ ಇಡೀ ಕಶ್ಮೀರವನ್ನು ಭಾರತ ಪಾಕಿಸ್ತಾನಕ್ಕೆ ಒಪ್ಪಿಸುವ ಸಾಧ್ಯತೆಯೂ ಇಲ್ಲಇವೆರಡೂ ಆಗದೇ ಕೇವಲ ರಾಷ್ಟ್ರನಾಯಕರ ಭೇಟಿಗಳಿಂದ ಮೈತ್ರಿಯುತ ಸಹಬಾಳ್ವೆ ಸಾಧ್ಯವಿಲ್ಲ.
ಇಷ್ಟಾಗಿಯೂ ಯೂರೋಪಿನ ಉದಾಹರಣೆ ನನಗೊಂದು ಆಶಾಕಿರಣದಂತೆ ಕಾಣುತ್ತಿದೆಯೂರೋಪಿನ ಸರಿಸುಮಾರು ಎಲ್ಲ ಗಡಿಗಳೂ ಎರಡು ಅಲುಗಿನ ಕತ್ತಿಯಂತಹ ಗಡಿಗಳುಈ ಗಡಿಗಳು ಆ ಖಂಡದಲ್ಲಿ ಶತಮಾನಗಳವರೆಗೆ ನೂರಾರು ಯುದ್ಧಗಳಿಗೆ ಕಾರಣವಾದವುಫ್ರೆಂಚರು ಮತ್ತು ಜರ್ಮನರು ಶಾರ್ಲೆಮಾನ್‌ನ ಕಾಲದಿಂದ ಇಪ್ಪತ್ತನೇ ಶತಮಾನದ ಮಧ್ಯದವರೆಗೆ ಅಂದರೆ ಸುಮಾರು ಸಾವಿರದ ಮುನ್ನೂರು ವರ್ಷಗಳವರೆಗೆ ಪರಸ್ಪರ ಕಾದಾಡುತ್ತಲೇ ಬಂದರುಆದರೆ ಎರಡನೆಯ ಮಹಾಯುದ್ದದ ನಂತರ ಈ ಕಾದಾಟಗಳ ನಿರುಪಯುಕ್ತತೆಯನ್ನು ಯೂರೋಪಿಯನ್ನರು ಅರ್ಥಮಾಡಿಕೊಂಡರುಬದಲಾಯಿಸಾಧ್ಯವಾದ ಗಡಿಗಳನ್ನು ಹೇಗಿವೆಯೋ ಹಾಗೇ ಒಪ್ಪಿಕೊಂಡು ಆರ್ಥಿಕ ಸಹಕಾರದ ತಳಹದಿಯ ಮೇಲೆ ಶಾಂತಿಯುತ ಸಹಬಾಳ್ವೆ ಸಾಗಿಸುವುದು ವಿವೇಕ ಎಂದು ಯೂರೋಪಿಯನ್ ರಾಷ್ಟ್ರಗಳು ಅರಿತ ನಂತರ ಆ ಖಂಡದಲ್ಲಿ ಘಟಿಸಿರುವುದು, ಘಟಿಸುತ್ತಿರುವುದು ಪವಾಡಅಲ್ಲೀಗ ಗಡಿವಿವಾದಗಳಿಲ್ಲ, ಯುದ್ಧವಿಲ್ಲ, ರಕ್ತಪಾತವಿಲ್ಲ.
ಅಂತಹ ಪವಾಡದ ಮೊದಲ ಗುರುತುಗಳು ದಕ್ಷಿಣ ಏಶಿಯಾದಲ್ಲಿ ಈಗ ಕಾಣಬರುತ್ತಿವೆಪರಸ್ಪರ ಆರ್ಥಿಕ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಅಭೂತಪೂರ್ವವೆನಿಸುವ ಕ್ರಮಗಳನ್ನು ಎರಡೂ ದೇಶಗಳು ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡಿವೆನವದೆಹಲಿ ದಶಕದ ಹಿಂದೆಯೇ ತನಗೆ ನೀಡಿರುವಂತಹ Most Favoured Nation (MFN) ಸ್ಥಾನವನ್ನು ಭಾರತಕ್ಕೆ ನೀಡಲು ಪಾಕಿಸ್ತಾನ ಇತ್ತೀಚೆಗೆ ಮನಸ್ಸು ಮಾಡಿದೆಪ್ರಪ್ರಥಮ ಬಾರಿಗೆ ಎರಡೂ ದೇಶಗಳ ವಾಣಿಜ್ಯ ಮಂತ್ರಿಗಳು ಗಡಿಯ ಅತ್ತ ಇತ್ತ ಪಯಣಿಸಿದ್ದಾರೆಯೂರೋಪಿಗೆ ಸಿದ್ಧ ಉಡುಪುಗಳ ನಿರ್ಯಾತದ ಸವಲತ್ತುಗಳನ್ನು ಪಡೆದುಕೊಳ್ಳಲು ಪಾಕಿಸ್ತಾನಕ್ಕೆ ಭಾರತ ದಾರಿ ಮಾಡಿಕೊಟ್ಟಿದೆಪರಸ್ಪರ ವ್ಯಾಪಾರದಲ್ಲಿ ಅಡ್ಡಿಯಾಗಿರುವ ಹಲವು ತಡೆಗಳನ್ನು ನಿರ್ಮೂಲಗೊಳಿಸಲು ಮೂರು ಒಪ್ಪಂದಗಳನ್ನು ಎರಡೂ ದೇಶಗಳು ಮಾಡಿಕೊಂಡಿವೆಲಾಹೋರ್ ಮತ್ತು ನವದೆಹಲಿಗಳಲ್ಲಿ ಪರಸ್ಪರ ವಾಣಿಜ್ಯ ಮೇಳಗಳು ಆಯೋಜಿತಗೊಂಡಿವೆವಾಘಾ-ಅಟಾರಿ ಗಡಿಯಲ್ಲಿ ಹೆಚ್ಚಿನ ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಎರಡನೆಯ ಪ್ರವೇಶದ್ವಾರವನ್ನು ತೆರೆಯಲಾಗಿದೆ.   ಸಹಕಾರ ಹೀಗೇ ಮುಂದುವರೆದರೆ ಸಧ್ಯದಲ್ಲೆ ಭಾರತೀಯ ಬ್ಯಾಂಕ್‌ಗಳು ಪಾಕಿಸ್ತಾನದಲ್ಲಿ ಮತ್ತು ಪಾಕಿಸ್ತಾನೀ ಬ್ಯಾಂಕುಗಳು ಭಾರತದಲ್ಲಿ ಶಾಖೆಗಳನ್ನು ತೆರೆಯುವ ಸಾಧ್ಯತೆ ಇದೆಇದೆಲ್ಲಕ್ಕೂ ಕಲಶಪ್ರಾಯವಾಗಿ ಪಾಕಿಸ್ತಾನೀಯರು ಭಾರತದಲ್ಲಿ ನೇರ ಬಂಡವಾಳ ಹೂಡಿಕೆಯಲ್ಲಿ ತೊಡಗುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ (ಅವರಲ್ಲಿ ಕೆಲವರು ಭಯೋತ್ಪಾದನಾ ಕ್ಷೇತ್ರದಲ್ಲಿ ಈಗಾಗಲೇ ಹೂಡಿರುವ ಬಂಡವಾಳದ ಮಾತು ಇಲ್ಲಿ ಬೇಡ).  ಇದೆಲ್ಲವೂ ಫಲ ನೀಡಿ ಎರಡೂ ದೇಶಗಳ ಜನತೆ ಪರಸ್ಪರ ಆರ್ಥಿಕವಾಗಿ ಒಬ್ಬರ ಮೇಲೊಬ್ಬರು ಅವಲಂಬಿತರಾದರೆ ಮಾತ್ರ ಯೂರೋಪಿನಲ್ಲಾದ ಪವಾಡ ದಕ್ಷಿಣ ಏಶಿಯಾದಲ್ಲೂ ಘಟಿಸಬಹುದು.
**     **     *
ಏಪ್ರಿಲ್ ೧೮, ೨೦೧೨ರ "ವಿಜಯವಾಣಿ" ದೈನಿಕದ "ಜಗದಗಲ" ಅಂಕಣದಲ್ಲಿ ಪ್ರಕಟವಾದ ಲೇಖನ


No comments:

Post a Comment